ವರ್ತೂರು ಸಂತೋಷ್ ಮತ್ತು ತನಿಷಾ ಕುಪ್ಪಂಡ ಫ್ರೆಂಡ್ಶಿಫ್ ಕಟ್? ಏನಾಯ್ತು!
ಇಷ್ಟು ದಿನಗಳ ಕಾಲ ವರ್ತೂರು ಸಂತೋಷ್ ಮತ್ತು ತನಿಷಾ ಕುಪ್ಪಂಡ ಅವರ ನಡುವೆ ಆಪ್ತತೆ ಇತ್ತು . ಆದರೆ ಈಗ ಅವರಿಬ್ಬರ ನಡುವೆ ಬಿರುಕು ಮೂಡಿದೆ. ತನಿಷಾಗೆ ತಾವು ಮಾನವೀಯತೆ ತೋರಿಸಲು ಸಾಧ್ಯವಿಲ್ಲ ಎಂದು ವರ್ತೂರುರವರು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಅವರ ಆಟದ ವೈಖರಿ ಈಗ ಬದಲಾಗಿದೆ. ಆರಂಭದಲ್ಲಿ ಸುಮ್ಮನೆ ಇರುತ್ತಿದ್ದ ಅವರು ಈಗ ಸಖತ್ ಜೋರಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ‘ಕಲರ್ಸ್ ಕನ್ನಡ’ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ಡಿಸೆಂಬರ್ 4ರ ಸಂಚಿಕೆಯಲ್ಲಿ ವರ್ತೂರು ಸಂತೋಷ್ ಅವರು ಸಿಕ್ಕಾಪಟ್ಟೆ ನೇರವಾಗಿ ಮಾತನಾಡುತ್ತಾರೆ. ನಾಮಿನೇಷನ್ ವಿಚಾರ ಬಂದಾಗ ತನಿಷಾ ಕುಪ್ಪಂಡ ಅವರಿಗೂ ವರ್ತೂರು ಸಂತೋಷ್ ಮುಲಾಜು ತೋರಿಸಿಲ್ಲ. ಅವರ ಈ ವರ್ತನೆ ನೋಡಿ ತನಿಷಾಗೆ ಶಾಕ್ ಆಗಿದೆ. ಅಷ್ಟೇ ಅಲ್ಲ, ಬಿಗ್ ಬಾಸ್ ಮನೆಯಲ್ಲಿ ಇರುವ ಇತರೆ ಸ್ಪರ್ಧಿಗಳೂ ಅಚ್ಚರಿಯಾಗಿದೆ . ಅಷ್ಟಕ್ಕೂ ವರ್ತೂರು ಸಂತೋಷ್ ಹೇಳಿದ್ದೇನು? ಇಲ್ಲಿದೆ ವಿವರ..
ಸೋಮವಾರ ಬಂತೆಂದರೆ ನಾಮಿಷನ್ ಪ್ರಕ್ರಿಯೆ ಶುರುವಾಗುತ್ತದೆ. ಯಾರು ಎಲಿಮಿನೇಟ್ ಆಗಬೇಕು ಎಂಬುದಕ್ಕೆ ಸ್ಪರ್ಧಿಗಳ ಹೆಸರನ್ನು ನಾಮಿನೇಟ್ ಮಾಡುವ ಸಂದರ್ಭ ಬಂದಾಗ ಎಲ್ಲರೂ ನಿಷ್ಠುರವಾಗಿ ನಡೆದುಕೊಳ್ಳುತ್ತಾರೆ. 9ನೇ ವಾರದಲ್ಲೂ ಹಾಗೆಯೇ ಆಗಿದೆ. ವರ್ತೂರು ಸಂತೋಷ್ ಅವರು ತನಿಷಾ ಕುಪ್ಪಂಡ ವಿರುದ್ಧವೇ ತಿರುಗಿ ಬಿದ್ದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ . 8ನೇ ವಾರದಲ್ಲಿ ತನಿಷಾಗೆ ಪೆಟ್ಟಾಗಿತ್ತು. ಆದರೂ ಕೂಡ ನಾಮಿನೇಷನ್ ವಿಚಾರದಲ್ಲಿ ತಾವು ಮಾನವೀಯತೆ ತೋರಿಸಲು ಸಾಧ್ಯವಿಲ್ಲ ಎಂದು ವರ್ತೂರು ಸಂತೋಷ್ ಅವರು ಹೇಳಿದ್ದಾರೆ.
‘ತನಿಷಾಗೆ ಇನ್ನೂ ಕಾಲು ನೋವು ಇದೆ. ಹಾಗಾಗಿ ಅವಳನ್ನೇ ಸೇವ್ ಮಾಡಿ’ ಎಂದು ಕಾರ್ತಿಕ್ ಮಹೇಶ್ ಅವರು ಕ್ಯಾಪ್ಟನ್ ಆದ ಸ್ನೇಹಿತ್ ಬಳಿ ಕೇಳಿಕೊಂಡರು. ಅದಕ್ಕೆ ವರ್ತೂರು ಸಂತೋಷ್ ಒಪ್ಪಿಕೊಳ್ಳಲಿಲ್ಲ. ‘ತ್ಯಾಗಮೂರ್ತಿಗಳಾಗಲು ನಾವು ಇಲ್ಲಿಗೆ ಬಂದಿಲ್ಲ. ತನಿಷಾ ಅವರನ್ನು ನಾನು ಬೇಕಂತಲೇ ಹೋಗಿ ತಳ್ಳಿಲ್ಲ. ಅದಕ್ಕಾಗಿ ತನಿಷಾಗೆ ಇನ್ನೊಂದು ಚಾನ್ಸ್ ಸಿಗಲಿ ಅಂತ ನಾನು ಕೇಳಲ್ಲ. ನಾವು ಮಾನವೀಯತೆ ಅಂತ ಹೋದರೆ ನಮ್ಮ ಹಿಂದೆ ಅಲ್ಲ.. ಮುಂದೆಯೇ ಹಳ್ಳ ತೋಡಿರುತ್ತಾರೆ’ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
ವರ್ತೂರು ಸಂತೋಷ್ ಅವರ ಈ ಮಾತಿನಿಂದ ನಮ್ರತಾ ಗೌಡ ಅವರಿಗೆ ಸಖತ್ ಖುಷಿಯಾಗಿದ್ದು, ಅವರು ಚಪ್ಪಾಳೆ ಹೊಡೆದು ಬೆಂಬಲ ಸೂಚಿಸಿದ್ದಾರೆ. ಆದರೆ ತನಿಷಾ ಕುಪ್ಪಂಡ ಅವರಿಗೆ ತೀವ್ರ ಅಸಮಾಧಾನ ಆಗಿದೆ. ಅದಕ್ಕೆ ಅವರು ಕೂಡಲೇ ತಿರುಗೇಟು ನೀಡಿದ್ದಾರೆ. ‘ಈಗ ಒಂದು ವಾರದಿಂದ ಮಾತನಾಡುತ್ತಿರುವ ವರ್ತೂರು ಸಂತೋಷ್ ಅವರು ಮೊದಲ ದಿನದಿಂದಲೇ ಮಾತನಾಡಿದ್ದರೆ ನಾನು ಈ ಮಾತನ್ನು ಮೆಚ್ಚಿಕೊಳ್ಳುತ್ತಿದ್ದೆ’ ಎಂದು ತನಿಷಾ ಹೇಳಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ